Feedback / Suggestions

ಅಕ್ರಮ ಮದ್ಯ ಮಾರಾಟ ಪ್ರಕರಣ.
ಪಂಚನಹಳ್ಳಿ ಪೊಲೀಸ್ ಠಾಣೆ.
ದಿನಾಂಕ:10-06-2022 ರಂದು ಪಂಚನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಕೆ. ಬಿದರೆ ಗ್ರಾಮದಲ್ಲಿ ಜಗದೀಶ ರವರ ಇಟ್ಟಿಗೆ ಪ್ಯಾಕ್ಟರಿಯ ಮುಂಭಾಗದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 40 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1405/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಂಚನಹಳ್ಳಿ ಠಾಣಾ ಪಿ.ಎಸ್.ಐ. ಕು: ಜಿ.ಕೆ. ಪವಿತ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 ಅಕ್ರಮ ಗಾಂಜಾ ಸೇವನೆ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ 10/06/2022 ರಂದು ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಕಿರಣ್ ಬೇಕರಿ ಹಿಂಭಾಗದ ರಸ್ತೆಯಲ್ಲಿ ರಾಮಮಂದಿರ ದೇವಾಲಯದ ಬಳಿ ಇರುವ ಅರಳಿಕಟ್ಟೆ ಬಳಿ 1] ಭರತ್ ಬಿನ್ ಸಂಜು 2] ಸಾಹೀಲ್ ಬಿನ್ ರಿಯಾಜ್ ಇಬ್ಬರೂ ಗೌರಿ ಕಾಲುವೆ ವಾಸಿಗಳು ಇವರು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಅರೋಫಿತರ ವಿರುದ್ದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಸವನಹಳ್ಳಿ ಠಾಣಾ ಪಿಎಸ್ಐ ಶ್ರೀಮತಿ ರೇಣುಕಾ ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ 10/06/2022 ರಂದು ಎನ್. ಆರ್. ಪುರ ಠಾಣಾ ಸರಹದ್ದಿನ ಲಿಂಗಾಪುರ ಗ್ರಾಮದ ಜೈಲ್ ಬಿಲ್ಡಿಂಗ್ ಹತ್ತಿರ ಗಣೇಶ ಬಿನ್ ಮುನಿಸ್ವಾಮಿ, ಲಿಂಗಾಪುರ ಗ್ರಾಮ ಈತನು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಅರೋಫಿತರ ವಿರುದ್ದ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಎನ್.ಆರ್. ಪುರ ಠಾಣಾ ಪಿಎಸ್ಐ ದಿಲೀಪ್ ಕುಮಾರ್ . ವಿ.ಟಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;10/06/2022 ರಂದು ಪಿರ್ಯಾದಿ ಶ್ರೀಮತಿ ಸಾವಿತ್ರಮ್ಮ ಕೊಂ ಜಯಣ್ಣ  ಅಮೃತಾಪುರ , ಎಮ್ಮೆದೊಡ್ಡಿ ಗ್ರಾಮ, ಕಡೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಶೋಭಾ ಇವಳು   ದಿನಾಂಕ; 09/06/2022 ರಂದು ರಾತ್ರಿ ಮನೆಯಲ್ಲಿ ಇದ್ದವಳು ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಶೋಭಾ  20 ವರ್ಷ,  ದುಂಡುಮುಖ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಮಗಳು ಶೋಭಾ ಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ 

ಕಳ್ಳತನ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

 ದಿನಾಂಕ;11/06/2022 ಪಿರ್ಯಾದಿ ಮೊಹಮ್ಮದ್ ತಸೀಫ್ ಬಿನ್ ಅಬುಬಕರ್ ಕಡಬಗೆರೆ, ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ದಿನಾಂಕ;10/06/2022 ರಂದು ತನ್ನ ಬಾಬ್ತು ಅಂಗಡಿಯನ್ನು ರಾತ್ರಿ ಬೀಗ ಹಾಕಿಕೊಂಡು ಹೋಗಿದ್ದು , ಈ ದಿನ ದಿನಾಂಕ 11/06/2022 ರಂದು ಹೋಗಿ ನೋಡಲಾಗಿ  ಯಾರೋ ಕಳ್ಳರು ಅಂಗಡಿ ಮೇಲ್ಬಾಗದ ಶೀಟ್ ಅನ್ನು ಎತ್ತಿ ಅಂಗಡಿಯ ಒಳಗೆ ಇಳಿದು ಅಂಗಡಿಯ ಕ್ಯಾಷ್ ಬಾಕ್ಸ್ ನಿಂದ 2600/- ರೂ  ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವು ಮಾಡಿದ ಕಳ್ಳರನ್ನು ಪತ್ತೆ ಮಾಡಿ ನಗದು ಹಣವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Last Updated: 11-06-2022 06:48 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080