ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ .

ಬಣಕಲ್ ಪೊಲೀಸ್ ಠಾಣೆ .

ದಿನಾಂಕ 15-07-2021 ರಂದು ಅರುಣ್ ಕುಮಾರ್, ತರುವೆ ಗ್ರಾಮ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 09-07-2021 ರಂದು ತರುವೆ ಗ್ರಾಮದ ಸರ್ವೆ ನಂಬರ್ 35/5 ಪಿ ಜಮಿನಿನಲ್ಲಿ  ಎರಡು ಸಿಂದಿಹಸುಗಳನ್ನು ಕಟ್ಟಿಹಾಕಿ ಬಂದಿದ್ದು ಸಂಜೆ ಅವುಗಳನ್ನು ಮನೆಗೆ ಹೊಡೆದುಕೊಂಡು ಬರಲು ಹೋದಾಗ ಒಂದು ಸಿಂದಿ ಹಸುವನ್ನು ಯಾರೋ ಕಳ್ಳರು ಕಳ್ಳತನ  ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋಗಿರುವ ಸಿಂದಿ ಹಸುವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರನ್ನು ಸ್ವೀಕರಿಸಿಕೊಂಡು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ  ಗೋ ಹತ್ಯಾ ಹಾಗೂ ಮಾಂಸ ಮಾರಾಟ ಪ್ರಕರಣ

ನಗರ  ಪೊಲೀಸ್ ಠಾಣೆ

ದಿನಾಂಕ: 15/07/2021 ರಂದು ಬೆಳಿಗ್ಗೆ  ಚಿಕ್ಕಮಗಳೂರು ನಗರದ ಟಿಪ್ಪುನಗರದ ಬಿಲಾಲ್  ಮಸೀದಿ ರಸ್ತೆಯ ಡೌನ್ ನಲ್ಲಿರುವ ಒಂದಿ ನೀಲಿ ಶೀಟ್ ಮನೆಯಲ್ಲಿ ಬಾಬರ್ ಎಂಬಾತನು ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು ಪಂಚರೊಂದಿಗೆ ದಾಳಿ ನಡೆಸಿದ್ದು ದನವನ್ನು ಕಡಿದು ಮಾರಾಟ ಮಾಡುತ್ತಿದ್ದವರನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಕೌಶಿಕ್ ಬಿನ್ ನವಾಜ್ ಜಾನ್, ಟಿಪ್ಪುನಗರ ವಾಸಿ ಎಂದು ಇನ್ನೊಬ್ಬನ ಹೆಸರು ಬಾಬರ್ ಬಿನ್ ಹನೀಫ್, ಟಿಪ್ಪುನಗರ ವಾಸಿಯಾಗಿದ್ದು ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 120 ಕೆಜಿಯಷ್ಟು ದನದ ಮಾಂಸ ಮತ್ತು ಅದರ ಚರ್ಮ, ಒಂದು ತೂಕ ಮಡುವ ಯಂತ್ರ, ಎರಡು ಕಬ್ಬಿಣದ ಕತ್ತಿ, ಐದು ಕಬ್ಬಿಣದ ಕೊಕ್ಕೆ, ಹಾಗೂ 6 ಜೀವಂತ ಜಾನುವಾರುಗಳನ್ನು ವಶಕ್ಕೆ ಪಡೆದು,  ಆರೋಪಿಯ ವಿರುದ್ದ ನಗರಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿಪಿ.ಎಸ್.ಐ. ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ನಗರ  ಪೊಲೀಸ್ ಠಾಣೆ .

ದಿನಾಂಕ: 15/07/2021 ರಂದು  ಚಿಕ್ಕಮಗಳೂರು ನಗರದ ಟಿಪ್ಪುನಗರದ 3ನೇ ಕ್ರಾಸ್ ನಲ್ಲಿ ಭಕ್ಷಿ ಎಂಬಾತನು ಅಕ್ರಮವಾಗಿ ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು  ಪಂಚರೊಂದಿಗೆ ದಾಳಿ ನಡೆಸಿದ್ದು ದನವನ್ನು ಕಡಿದು ಮಾರಾಟ ಮಾಡುತ್ತಿದ್ದವನ ಹೆಸರು ವಿಳಾಸ ಕೇಳಲಾಗಿ ಭಕ್ಷಿ ಬಿನ್ ಹನೀಫ್,ಮಾರ್ಕೆಟ್ ರಸ್ತೆ ವಾಸಿ ಎಂದು ತಿಳಿಸಿದ್ದು ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 350 ಕೆಜಿಯಷ್ಟು ದನದ ಮಾಂಸ ಮತ್ತು ಅದರ ಚರ್ಮ, ಒಂದು ತೂಕ ಮಡುವ ಯಂತ್ರ, ನಾಲ್ಕು ಕಬ್ಬಿಣದ ಕತ್ತಿ, ನಾಲ್ಕು ಕಬ್ಬಿಣದ ಕೊಕ್ಕೆಗಳನ್ನು ವಶಕ್ಕೆ ಪಡೆದು,  ಆರೋಪಿಯ ವಿರುದ್ದ ನಗರಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ನಗರ  ಪೊಲೀಸ್ ಠಾಣೆ .

ದಿನಾಂಕ: 15/07/2021 ರಂದು ಚಿಕ್ಕಮಗಳೂರು ನಗರದ ಟಿಪ್ಪುನಗರದ 3ನೇ ಕ್ರಾಸ್ ನಲ್ಲಿ ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು ಪಂಚರೊಂದಿಗೆ ದಾಳಿ ನಡೆಸಿದ್ದು ತಮಿಳು ಕಾಲೋನಿಯಲ್ಲಿರುವ ಖಾಲೀದ್ ರವರಿಗೆ ಸೇರಿದ ಮನೆಯೊಳಗೆ 6 ಜನರಿದ್ದು , ಅದರಲ್ಲಿ 4 ಜನರು 4 ದನಗಳನ್ನು ಕೊಯ್ದು ಅವುಗಳ ಚರ್ಮವನ್ನು ಸುಲಿಯುತ್ತಿರುವುದು ಕಂಡುಬಂದಿದ್ದರಿಂದ ಅವರುಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಖಾಲೀದ್ ಬಿನ್ ಫಜ್ಲರ್ ರೆಹಮಾನ್ , 50 ವರ್ಷ, 2) ಫಾರೂಕ್ ಬಿನ್ ಖಾಲೀದ್, 29 ವರ್ಷ, 3) ಇರ್ಫಾನ್ ಸಂಧಿ ಬಿನ್ ಸರ್ದಾರ್ ಸಂಧಿ, 39 ವರ್ಷ, 4) ಸಲ್ಮಾನ್ ಖಾನ್ ಬಿನ್ ಇಸ್ಮಾಯಿಲ್ ಖಾನ್ 24 ವರ್ಷ, ಎಲ್ಲರೂ ತಮಿಳುಕಾಲೋನಿ ವಾಸಿಗಳಾಗಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 550 ಕೆಜಿಯಷ್ಟು ದನದ ಮಾಂಸ, ಕಭ್ಭಿಣದ ಚಾಕು, ಮೂರು ಕಬ್ಬಿಣದ ಮಸ್ಕುಲ್ಲಾ, , ಎರಡು ಕಬ್ಬಿಣದ ಕೊಕ್ಕೆ, ರಾಥಲ್ ಸ್ಕೇಲ್ ಹಾಗೂ ಜೀವಂತವಿರುವ 3 ಎಮ್ಮೆ ಕೋಣದ ಕರುಗಳು, 5 ದನದ ಕರುಗಳನ್ನು ವಶಕ್ಕೆ ಪಡೆದು,  ಆರೋಪಿಯ ವಿರುದ್ದ ನಗರಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 ನಗರ  ಪೊಲೀಸ್ ಠಾಣೆ .

ದಿನಾಂಕ: 15/07/2021 ರಂದು  ಚಿಕ್ಕಮಗಳೂರು ನಗರದ ತಮಿಳೂಕಾಲೋನಿಯಲ್ಲಿರುವ ಅಕ್ಸಾ ಮಸೀದಿ ಪಕ್ಕದ ರಸ್ತೆಯ ಅನ್ಸರ್ ಎಂಬಾತನು  ಅಕ್ರಮವಾಗಿ ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದೆ ಎಂದು ತಿಳಿಸಿದ್ದು  ಪಂಚರೊಂದಿಗೆ ದಾಳಿ ನಡೆಸಿದ್ದು ಅನ್ಸರ್ ಎಂಬಾತನು ತನ್ನ ಮನೆಯೊಳಗೆ ದನವನ್ನು ಕಡಿದು ನೇತು ಹಾಕಿದ್ದು ಓಡಿಹೋದ ಆಸಾಂಇಯ ಹೆಸರು ವಿಳಾಸ ಕೇಳಲಾಗಿ ಅನ್ಸರ್ ಬಿನ್ ಸಲೀಂ, 35 ವರ್ಷ, ತಮಿಳುಕಾಲೋನಿ ವಾಸಿ ಎಂದು ತಿಳಿದಿದ್ದು,  ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದುದು ಕಂಡುಬಂದಿದ್ದರಿಂದ ಕೃತ್ಯಕ್ಕೆ ಸಂಬಂಧಿಸಿದ  ಸುಮಾರು 18 ಕೆಜಿಯಷ್ಟು ದನದ ಮಾಂಸ ಮತ್ತು ಅದರ ಚರ್ಮ, ಎರಡು ಕಬ್ಬಿಣದ ಕತ್ತಿ, ಒಂದು ತಕ್ಕಡಿ, ಮೂರು ಕಬ್ಬಿಣದ ಕೊಕ್ಕೆಹಾಗೂ ಒಂದು ಕೆಜಿ ಹಾಗೂ ಅರ್ದ ಕೆಜಿ ತೂಕದ ಬೊಟ್ಟುಗಳನ್ನು ವಶಕ್ಕೆ ಪಡೆದು,  ಆರೋಪಿಯ ವಿರುದ್ದ ನಗರಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಇತ್ತೀಚಿನ ನವೀಕರಣ​ : 16-07-2021 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080