Feedback / Suggestions

ಮನುಷ್ಯ ಕಾಣೆ  ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:17-05-2022 ರಂದು ಚಂದ್ರಶೇಖರ ಬಿನ್ ಮಹಾಬಲ ಪೂಜಾರಿ, ಸಿ.ಆರ್.ಎಸ್. ಹೇರೂರು, ಕೊಪ್ಪ ತಾಲ್ಲೋಕು ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳು ಕು: ನಿಶಾ ಇವಳು ಈ ದಿನ  ಬೆಳಿಗ್ಗೆ 11-00 ಗಂಟೆಗೆ ಮನೆಯಲ್ಲಿ ಇದ್ದವಳು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಕು: ನಿಶಾ ಇವಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:16-05-2022 ರಂದು 16.15 ಗಂಟೆ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ತಿಮ್ಮನಹಳ್ಳಿ  ಮರ್ಲೆ ಗ್ರಾಮದ ಬಸ್ ನಿಲ್ದಾಣದಲ್ಲಿರುವ ಗೂಡಂಗಡಿಯ ಪಕ್ಕದಲ್ಲಿ  ಸಾರ್ವಜನಿಕ ಸ್ಥಳದಲ್ಲಿ 1.ಸುರೇಶ ಟಿ.ಎಸ್. ಬಿನ್ ಸಣ್ಣಯ್ಯ , 2. ಉಷಾ ಪಿ ಕೋಂ ಸುರೇಶ ತಿಮ್ಮನಹಳ್ಳಿ  ಮರ್ಲೆ ಗ್ರಾಮದ ವಾಸಿಗಳು ಇವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತರನ್ನು ವಶಕ್ಕೆ ಪಡೆದು ಅರೋಪಿತರು ಕಾರಿನಲ್ಲಿ ಅಕ್ರಮವಾಗಿ 90 ಎಂ.ಎಲ್. ನ 37 ಮದ್ಯವನ್ನು ಹೊಂದಿದ್ದು ಅಂದಾಜು ಬೆಲೆ 1299.81/-ರೂ ಗಳಾಗಿರುತ್ತೆ. ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿಎಸ್ಐ ಚಿಂತನ್ ಕೆ.ಅರ್.  ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಬಾಳೂರು ಪೊಲೀಸ್ ಠಾಣೆ.

ದಿನಾಂಕ:16-05-2022 ರಂದು ಬಾಳೂರು ಪೊಲೀಸ್ ಠಾಣಾ ಸರಹದ್ದಿನ ಗಬ್ಗಲ್ ಗ್ರಾಮದಲ್ಲಿಮೂರ್ತಿ ಬಿನ್ ಕ್ರಿಸ್ತರಾಜ್ ಹೋಟೇಲ್  ಕೆಲಸ ವಾಸ ಗಬ್ಗಲ್ ಗ್ರಾಮ  ತಮ್ಮ ಹೋಟೆಲ್  ನಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 49 ಮದ್ಯವನ್ನು ಹೊಂದಿದ್ದು ಅಂದಾಜು ಬೆಲೆ 1721/- ರೂ ಗಳಾಗಿರುತ್ತೆ. ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತಳ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಾಳೂರು ಠಾಣಾ ಪಿಎಸ್ಐ ಪವನ್ ಕುಮಾರ್ ಸಿ.ಸಿ. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 16-05-2022 ರಂದು ಸೋಮಶೇಖರ ಬಿನ್ ರಾಮಪ್ಪ ಕೋಟೆ ಕ್ಯಾಂಪ್ ಗೊಲ್ಲರಹಟ್ಟಿ ತರೀಕೆರೆ ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ಚಂದನ ಇವಳು ದಿನಾಂಕ;14/05/2022 ರಂದು ಬೆಳಿಗ್ಗೆ ಮಾತ್ರೆ ತರುತ್ತೇನೆಂದು ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಚಂದನ, 22 ವರ್ಷ, ದುಂಡುಮುಖ, ಎಣ್ಣೆಗೆಂಪು ಬಣ್ಣ, ದೃಡಕಾಯ ಮೈಕಟ್ಟು, ಮನೆಯಿಂದ ಹೋಗುವಾಗ ಹರಿಶಿನ ಕಲರ್ ಚೂಡಿದಾರ್ ಕಪ್ಪು ವೇಲ್  ಧರಿಸಿರುತ್ತಾಳೆ. ಇವಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Last Updated: 17-05-2022 07:30 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080