Feedback / Suggestions

ಅಕ್ರಮ ಜೂಜಾಟ ಹಾಗೂ ಕೊವಿಡ್- 19 ನಿಯಮ ಉಲ್ಲಂಘನೆ ಪ್ರಕರಣ

ಲಿಂಗದಹಳ್ಳಿ  ಪೊಲೀಸ್ ಠಾಣೆ

ದಿನಾಂಕ 22/06/2021 ರಂದು ಲಿಂಗದಹಳ್ಳಿ ಗ್ರಾಮದ ಯರದಂಕಲು ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಹಣವನ್ನು ಕಟ್ಟಿಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಲಿಂಗದಹಳ್ಳಿ ಗ್ರಾಮದ ಯರದಂಕಲು ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದು ,ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ, ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಜೂಜಾಟವಾಡುತ್ತಿದ್ದ 7 ಜನರನ್ನು   ಆರೋಪಿಗಳನ್ನು ವಶಕ್ಕೆ  ಪಡೆದಿದ್ದು,   ಆರೋಪಿತರ ವಶದಲ್ಲಿದ್ದ ಒಂದು ಹಳದಿ, ಕಂದು ಬಣ್ಣದ ಹಳೆಯ ಹರಿದ ಚಾಪೆ, 52 ಇಸ್ಪೀಟ್ ಎಲೆಗಳು, 4 ಮೊಬೈಲ್ ಗಳು ಹಾಗೂ 2240 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ   ವಿರುದ್ದ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಫೀಕ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಬಸವನಹಳ್ಳಿ ಪೊಲೀಸ್ ಠಾಣೆ. 

ದಿನಾಂಕ 22-06-2021 ರಂದು ಪಿರ್ಯಾದುದಾರರಾದ ಮಂಜುಳ ಕೋಂ ದಿನೇಶ, ಕೆಂಪನಹಳ್ಳಿ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ದಿನೇಶನೊಂದಿಗೆ ಈಗ್ಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು 2 ಜನ ಮಕ್ಕಳಿರುತ್ತಾರೆ. ಪಿರ್ಯಾದಿಯ ಗಂಡ ದಿನೇಶರವರು ಗಾರೆ ಕೆಲಸ ಮಾಡಿಕೊಂಡಿದ್ದು ಈಗ್ಗೆ 8 ತಿಂಗಳ ಹಿಂದೆ ಬೇರೆ ಯಾವುದೋ ಹೆಂಗಸಿನ ಸಂಬಂಧ ಮಾಡಿಕೋಂಡು ಮನೆಯನ್ನು ಬಿಟ್ಟು ಹೋಗಿದ್ದು ಈ ಬಗ್ಗೆ  ಮಹಿಳಾ ಠಾಣೆಗೆ  ದೂರು ನೀಡಿದ್ದು 5 ತಿಂಗಳ ಹಿಂದೆಯಷ್ಟೇ ದಿನೇಶ್ ರವರನ್ನು ಕರೆಯಿಸಿ ಬುದ್ದಿವಾದ ಹೇಳಿ ಸಂಸಾರ ಮಾಡಿಕೊಂಡು ಹೋಗುವಂತೆ ತಿಳಿಸಿರುತ್ತಾರೆ. ಆದರೆ ಈಗ್ಗೆ  3 ತಿಂಗಳಿನಿಂದ ದಿನೇಶರವರು ಮನೆಗೆ ಬಾರದೇ ಎಲ್ಲಿರುತ್ತಾರೆಂದು ತಿಳಿದಿರುವುದಿಲ್ಲ ,ಆದ್ದರಿಂದ ದಿನೇಶರವರನ್ನು ಹುಡುಕಿಕೊಡಬೇಕಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು  ಬಸವನಹಳ್ಳಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ನಿರ್ಲಕ್ಷ್ಯತನದ  ಪ್ರಕರಣ .

ಗ್ರಾಮಾಂತರ ಪೊಲೀಸ್  ಠಾಣೆ .

ದಿನಾಂಕ 22-06-2021 ರಂದು ಪಿರ್ಯಾದುದಾರರಾದ ರಾಜು ಬಿನ್ ಮರಿರಾಜು, ತೇಗೂರು ಗ್ರಾಮವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಈ ದಿವಸ ಪಿರ್ಯಾದುದಾರರು   ಹಾಗೂ ಅವರ ಅಕ್ಕ ಶಂಕರಮ್ಮರವರು ಹೊಲದಲ್ಲಿ ಕೆಲಸ ಮುಗಿಸಿ ಎತ್ತಿನ ಗಾಡಿಯಲ್ಲಿ  ವಾಪಾಸ್ ಮನೆಗೆ ಬರುತ್ತಿರುವಾಗ  ಹೇಮಂತ ಬಿನ್ ಕಾಂತರಾಜುರವರು ಹಿಂಬದಿಯಿಂದ ರೇಸಿನ ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದು , ಪಿರ್ಯಾದುದಾರರ ಅಕ್ಕನ ಮಗನಾದ ಹೂವೇಶನು ಎತ್ತುಗಳು ಬೆದರುತ್ತವೆ ಮುಂದೆ ಹೋಗಬೇಡ ಎಂದು ಹೇಳಿದರೂ ಸಹ ನಿರ್ಲಕ್ಷ್ಯತನದಿಂದ  ಕುದುರೆಯನ್ನು ಓಡಿಸಿಕೊಂಡು ಬಂದ ಪರಿಣಾಮ ಪಿರ್ಯಾದುದಾರರ ಎತ್ತುಗಳು ಬೆದರಿ ಗಾಡಿಸಮೇತ ಓಡಿಹೋಗಿ ಮಾರುಕಟ್ಟೆ ಸೇತುವೆಯ ಮೇಲೆ ಬಿದ್ದು ,ಪಿರ್ಯಾದುದಾರರಿಗೆ ಹಾಗೂ ಅವರ ಅಕ್ಕನಿಗೆ ಹಾಗೂ ಎತ್ತುಗಳಿಗೆ ಗಾಯವಾಗಿದ್ದು ಆರೋಪಿ ಹೇಮಂತನ ವಿರುದ್ದ ಗ್ರಾಮಾಂತರ  ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

Last Updated: 25-06-2021 06:35 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080