Feedback / Suggestions

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ:23/04/2022 ರಂದು ಪಿರ್ಯಾದಿ ಹೊಸದೇವರ ಹಡ್ಲು, ನೆಮ್ಮಾರು ವಾಸಿ ಹೆಚ್.ಎ. ರವಿಶಂಕರ ಬಿನ್ ಲೇಟ್ ಅಚ್ಚುತ ರಾವ್  ಇವರು ನೀಡಿದ ದೂರಿನಲ್ಲಿ, ದಿನಾಂಕ:23/04/2022 ರಂದು ಬೆಳಿಗ್ಗೆ ಪಿರ್ಯಾದಿಯ ಭಾವ ಬೆಂಗಳೂರಿನ ಉತ್ತರಹಳ್ಳಿ ವಾಸಿ ಶಶಿಶೇಖರ ಭಟ್ ಇವರು ನೆಮ್ಮಾರಿನಿಂದ ಶೃಂಗೇರಿಗೆ  ಕೆಲಸದ ನಿಮಿತ್ತಾ  ಕೆಎ-18-ಎಲ್-8253 ಹಿರೋಹೊಂಢಾ ಸ್ಲೆಂಡರ್ ಬೈಕಿನಲ್ಲಿ ಹೋಗಿ ವಾಪಸ್ಸು ಬರುವಾಗ ನೆಮ್ಮಾರು ಮಾಣಿಬೈಲು ಹತ್ತಿರ ಎನ್.ಹೆಚ್. 179 ರಸ್ತೆಯಲ್ಲಿ ಕೆಎ-11-ಎಂ-9611 ರ ಕಾರಿನ ಚಾಲಕ ಕಾರ್ ಅನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು  ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಬೈಕಿನ ಚಾಲಕ ಶಶಿಶೇಖರ ಭಟ್ ಗೆ ಬಲವಾದ ಪೆಟ್ಟಾಗಿದ್ದು,  ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು, ನೀಡಿದ ದೂರಿನ ಮೇರೆಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ  ಬಂದೂಕು ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;22/04/2022 ರಂದು ಕೊಪ್ಪ  ಠಾಣಾ ಸರಹದ್ದಿನ ಹುಲುಗಾರು ಗ್ರಾಮದ ವಾಸಿ ನಾಗೇಶ್ ಬಿನ್ ಪುಟ್ಟಯ್ಯ ಇವರು ಅಕ್ರಮ ಬಂದೂಕು ಹೊಂದಿದ್ದು ದಾಳಿ ಮಾಡಿದಾಗ ನಾಗೇಶ್ ಬಿನ್ ಪುಟ್ಟಯ್ಯ ರವರು ಯಾವುದೇ ಪರವಾನಗಿ ಇಲ್ಲದೆ ಎಸ್.ಬಿ.ಎಂ.ಎಲ್. ಬಂದೂಕನ್ನು ಹೊಂದಿದ್ದು , ಬಂದೂಕು ಹೊಂದಿರುವ ಬಗ್ಗೆ ಸರಿಯಾದ ಪರವಾನಗಿಯನ್ನು ಹಾರಜ್ಪಡಿಸದೇ ಬೇರೆಯವರ ಹೆಸರಿನ ಪರವಾನಗಿಯನ್ನು ನೀಡಿದ್ದು, ಅರೋಫಿತನ ಬಳಿ ಇದ್ದ ಬಂದೂಕನ್ನು ಮತ್ತು ಪರವಾನಗಿಯನ್ನು   ಅಮಾನತ್ತುಪಡಿಸಿಕೊಂಡು ಬಂದು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ. ಪಿ.ಎಸ್.ಐ. ಗೋವಿಂದನಾಯ್ಕ, ಬಿ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಸಾಗಾಣೀಕೆ  ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;22/04/2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಮಲ್ಲೇದೇವರಹಳ್ಳಿ ಕ್ರಾಸ್ ಬಳಿ ಚಿಕ್ಕಮಗಳೂರು -ಬೇಲೂರು ರಸ್ತೆಯಲ್ಲಿ ಅಕ್ರಮವಾಗಿ ಕೆಎ-18-ಸಿ-1421 ನಂಬರಿನ ವಾಹನದಲ್ಲಿ ದನದ 18 ಚಿಕ್ಕ ಕರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದು,  ಆರೋಪಿತರು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಕೆಎ-18-ಸಿ-1421 ನಂಬರಿನ  ಲಾರಿಯನ್ನು ಮತ್ತು 18 ದನದ ಕರುಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಗೇನೋಜಾ ಕೆ.ಟಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ;22/04/2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ಬುಕ್ಕಂಬುದಿ  ಗ್ರಾಮದ ವಾಸಿಯಾದ ರಾಜಾರಾಂ  ಬಿನ್ ರಾಮಸ್ವಾಮಿ ಎಂಬುವರು ತನ್ನ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು, ಅಕ್ರಮವಾಗಿ  ಹೊಂದಿದ್ದ 108 ಎಂ.ಎಲ್ ನ 07 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ ರೂ 520/- ಅಗಿದ್ದು, ಮಾರಾಟ ಮಾಡಿದ ಹಣ 100/- ರೂ ನಗದು ಇದ್ದು  ಸದರಿ ಮದ್ಯವನ್ನು ಮತ್ತು ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಅಜ್ಜಂಫುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಅಜ್ಜಂಫುರ ಪಿ.ಎಸ್.ಐ. ಜಿ.ಕೆ. ಬಸವರಾಜ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

Last Updated: 23-04-2022 07:27 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080