Feedback / Suggestions

ಅಕ್ರಮ ಗೋಹತ್ಯಾ ಮತ್ತು ಗೋ ಮಾಂಸ ಮಾರಾಟ ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 26-11-2021 ರಂದು ತರೀಕೆರೆ ಠಾಣಾ ಸರಹದ್ದಿನ ಚಿಕ್ಕರೆಯ ಪಕ್ಕದಲ್ಲಿರುವ ಪಾಳು ಬಿದ್ದ ಮನೆಯಲ್ಲಿ  ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಸೈಯದ್ ಹುಸೇನ್ @ ಪೈರೋಜ್ ಬಿನ್ ಖಲಂದರ್ ವಾಸ ಚಿಕ್ಕೆರೆ ಯನ್ನು ವಶಕ್ಕೆ ಪಡೆದು ಒಬ್ಬ ಆರೋಪಿ ತೌಕಲ್ ಮಸ್ತಾನಾ ಓಡಿ ಹೋಗಿದ್ದು ಆರೋಪಿ ಸೈಯದ್ ಹುಸೇನ್ ಗೆ ದನವನ್ನು ಮಾಂಸವನ್ನು ಅರೋಪಿ ತೌಕಲ್ ಮಸ್ತಾನಾ ನೀಡಿದ್ದು ಅರೋಫಿ ಹೊಂದಿದ್ದ 50-60 ಕೆ.ಜಿ ಮಾಂಸವನ್ನು  ಅಂದಾಜು ಬೆಲೆ 6000/- ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಠಾಣಾ ಪಿ.ಐ. ಶ್ರೀ ರಾಘವೇಂದ್ರ ಕೆ.ಎನ್.   ಹಾಗೂ ಸಿಬ್ಬಂದಿಯವರಾದ ಕಾಂತೇಶ್  ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋಹತ್ಯಾ ಮತ್ತು ಗೋಮಾಂಸ ಸಾಗಾಣಿಕೆ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 26-11-2021 ರಂದು ಅಜ್ಜಂಫುರ ಠಾಣಾ ಸರಹದ್ದಿನ ತರೀಕೆರೆ ಅಜ್ಜಂಫುರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅಜ್ಜಂಪುರ ಪಟ್ಟಣದ ನೂತನ ಕನ್ನಡ ಶಾಲೆಯ ಬಳಿ ಕೆಎ-13-ಎನ್-9009 ರ ಓಮಿನಿ ವಾಹನದಲ್ಲಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಖಲೀಲ್ ಖಾನ್ ಬಿನ್ ಮೊಹಮ್ಮದ್ ಖಾನ್  ವಾಸ ಸ್ಟೇಷನ್ ದುಗ್ಲಾಪುರ ಈತನನ್ನು ವಶಕ್ಕೆ ಪಡೆದು ಆರೋಪಿಯು ಓಮಿನಿ ವಾಹನದಲ್ಲಿ ಸಾಗಣಿಕೆ ಮಾಡುತ್ತಿದ್ದ 32 ಕೆ.ಜಿ ಯಷ್ಟು ದನವನ್ನು ಮಾಂಸವನ್ನು ಅಂದಾಜು ಬೆಲೆ 7,000/- ರೂ ಮತ್ತು ಕೆಎ-13-ಎನ್-9009 ರ ಓಮಿನಿ ವಾಹನವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ಖಲೀಲ್ ಖಾನ್ ಮತ್ತು ಅರೋಪಿಗೆ ಮಾರಾಟ ಮಾಡಲು ದನದ ಮಾಂಸವನ್ನು ನೀಡಿದ ತರೀಕೆರೆ ಕೋಡಿ ಕ್ಯಾಂಪ್ ವಾಸಿ ಅನ್ನು ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಠಾಣಾ ಪಿ.ಎಸ್.ಐ. ಶ್ರೀ ಬಸವರಾಜ್  ಜಿ.ಕೆ.   ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಕಾಳಚಾರ್, ಸಿಬ್ಬಂದಿಯವರಾದ ಓಂಕಾರಮೂರ್ತಿ, ಕಿರಣಕುಮಾರ್, ಶರತ್ ರಾಜ್   ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋಹತ್ಯಾ ಮತ್ತು ಗೋಮಾಂಸ ಸಾಗಾಣಿಕೆ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 26-11-2021 ರಂದು ಅಜ್ಜಂಫುರ ಠಾಣಾ ಸರಹದ್ದಿನ ತರೀಕೆರೆ ಅಜ್ಜಂಫುರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅಜ್ಜಂಪುರ ಪಟ್ಟಣದ ನೂತನ ಕನ್ನಡ ಶಾಲೆಯ ಬಳಿ ಕೆಎ-13-ಎನ್-9009 ರ ಓಮಿನಿ ವಾಹನದಲ್ಲಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಖಲೀಲ್ ಖಾನ್ ಬಿನ್ ಮೊಹಮ್ಮದ್ ಖಾನ್  ವಾಸ ಸ್ಟೇಷನ್ ದುಗ್ಲಾಪುರ ಈತನನ್ನು ವಶಕ್ಕೆ ಪಡೆದು ಆರೋಪಿಯು ಓಮಿನಿ ವಾಹನದಲ್ಲಿ ಸಾಗಣಿಕೆ ಮಾಡುತ್ತಿದ್ದ 32 ಕೆ.ಜಿ ಯಷ್ಟು ದನವನ್ನು ಮಾಂಸವನ್ನು ಅಂದಾಜು ಬೆಲೆ 7,000/- ರೂ ಮತ್ತು ಕೆಎ-13-ಎನ್-9009 ರ ಓಮಿನಿ ವಾಹನವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ಖಲೀಲ್ ಖಾನ್ ಮತ್ತು ಅರೋಪಿಗೆ ಮಾರಾಟ ಮಾಡಲು ದನದ ಮಾಂಸವನ್ನು ನೀಡಿದ ತರೀಕೆರೆ ಕೋಡಿ ಕ್ಯಾಂಪ್ ವಾಸಿ ಅನ್ನು ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಠಾಣಾ ಪಿ.ಎಸ್.ಐ. ಶ್ರೀ ಬಸವರಾಜ್  ಜಿ.ಕೆ.  ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಕಾಳಚಾರ್, ಸಿಬ್ಬಂದಿಯವರಾದ ಓಂಕಾರಮೂರ್ತಿ, ಕಿರಣಕುಮಾರ್, ಶರತ್ ರಾಜ್   ರವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 26/11/2021 ರಂದು ಪಿರ್ಯಾದಿ ಡಿ.ಪಿ.ಪರಮೇಶ್ವರಪ್ಪ ಬುಕ್ಕಾಂಬುದಿ ವಾಸಿ ಇವರು ನೀಡಿದ ದೂರಿನಲ್ಲಿ  ಪಿರ್ಯಾದಿಯು ಅಡಿಕೆ ಬೆಳೆಗಾರನಾಗಿದ್ದು ಅಡಿಕೆ ಬೇಯಿಸಿ ಓಣಗಲು ಹಾಕಿದ್ದ ಅಡಿಕೆಯನ್ನು ದಿನಾಂಕ 25/11/2021 ರಂದು ರಾತ್ರಿ ಹಾಕಿದ್ದು ದಿನಾಂಕ 26/11/2021 ರಂದು ಬೆಳಿಗ್ಗೆ ನೋಡಲಾಗಿ ಅಡಿಕೆಯಲ್ಲಿ  30000/- ರೂ ಬೆಲೆಯ ಸುಮಾರು 120 ಕೆ.ಜಿ ಯಷ್ಟು  ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಅಡಿಕೆಯನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಕಡೂರು  ಪೊಲೀಸ್ ಠಾಣೆ.

ದಿನಾಂಕ:25-11-2021 ರಂದು ಸಂಜೆ ಕಡೂರು ಠಾಣಾ ಸರಹದ್ದಿನ  ವಿ.ಸಿದ್ದರಹಳ್ಳಿ ಗ್ರಾಮದ ಸಮೀಪವಿರುವ ಚಿಕ್ಕಕಟ್ಟೆ ಸಕರ್ಾರಿ ಖಾಲಿ ಜಾಗದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1. ವಿಜಯ್ ಬಿನ್ ರಾಮಸ್ವಾಮಿ 2. ಶ್ರೀನಿವಾಸ ಬಿನ್ ಮಹೇಶ್ವರಪ್ಪ  3. ರಾಕೇಶ ಬಿನ್ ಗಿಡ್ಡಬೋವಿ 4. ಪ್ರಭು ಬಿನ್ ಗೋವಿಂದಪ್ಪ  5. ಗಜೇಂದ್ರ ಬಿನ್ ಗೋವಿಂದಪ್ಪ 6. ಚೇತನ ಬಿನ್ ಜಯಣ್ಣ 7. ಕಾರ್ತಿಕ್ ಬಿನ್ ಚಂದ್ರಪ್ಪ ರವರನ್ನು ವಶಕ್ಕೆ ಪಡೆದು ಆರೋಪಿತರಾದ 1. ಸುನೀಲ್ ಕಲ್ಲಾಪುರ 2. ನಿಂಗಣ್ಣ @ ಮಾರಿಗುಡಿ 3. ಕುಮಾರ ಮಲ್ಲೇಶ್ವರ  4. ಮೋಹನ ಮಲ್ಲೇಶ್ವರ 5. ಮಂಜಣ್ಣ ಮಲ್ಲೇಶ್ವರ 6. ಮೋಹನ ಕಡೂರು ಹೊಸಳ್ಳಿ 7. ಧರ್ಮ ಬೀರೂರು, 8. ಕಿರಣ ಮಲ್ಲಿದೇವಿಹಳ್ಳಿ ಗ್ರಾಮ ರವರು ಓಡಿ ಹೋಗಿದ್ದು ಆರೋಪಿತರು  ಇಸ್ಪೀಟ್ ಜೂಜಾಡಲು ಬಳಸಿದ್ದ 19,950/-ರೂ ನಗದು ಹಣ,  52 ಇಸ್ಪೀಟ್ ಎಲೆಗಳು ಹಾಗೂ ಒಂದು ಬಿಳಿ ಪ್ಲಾಸ್ಟಿಕ್ ಶೀಟ್ ವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಠಾಣಾ ಪಿ.ಎಸ್.ಐ. ಶ್ರೀಮತಿ ಎನ್. ಕೆ. ರಮ್ಯ  ಪ್ರೋ: ಪಿ.ಎಸ್.ಐ. ಆದರ್ಶ ಎ.ಎಸ್.ಐ.ಗಳಾದ ವೇದಮೂರ್ತಿ, ಧರ್ಮೇಗೌಡ ಹಾಗೂ ಸಿಬ್ಬಂದಿಯವರಾದ ಸಿ.ಟಿ. ರಮೇಶ , ಚಂದ್ರಶೇಖರ, ಉಮೇಶ, ಮಂಜಪ್ಪ, ರವಿಕುಮಾರ್, ಶಿವರಾಜ್, ಕೃಷ್ಣಮೂರ್ತಿ,  ಶಿವು, ರಮೇಶ್ ನಾಯ್ಕ, ಉಮೇಶ, ಓಂಕಾರ ರವರು ಪಾಲ್ಗೊಂಡಿರುತ್ತಾರೆ.

Last Updated: 26-11-2021 08:09 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080