ಅಕ್ರಮ ಮದ್ಯ ಮಾರಾಟ ಪ್ರಕರಣ
ಮಲ್ಲಂದೂರು ಪೊಲೀಸ್ ಠಾಣೆ.
ದಿನಾಂಕ 27.05.2022 ರಂದು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಕೂಡು ಗ್ರಾಮದಲ್ಲಿ ರಸ್ತೆ ತಿರುವಿನಲ್ಲಿ ಬಡಾವಣೆಯ ಚಂದ್ರಮಲೈ ಬಿನ್ ಗೋಪಾಲ ಚನ್ನಗೊಂಡನಹಳ್ಳಿ, ವಾಸಿ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು 90 ಎಂ.ಎಲ್. ನ 08 ಟೆಟ್ರಾ ಎಂ.ಎಲ್. ನ 280/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಅರೋಪಿ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ 50 ರೂ ಹಾಗೂ 10 ರೂ ಬೆಲೆಯ ಎರಡು ಪ್ಲಾಸಿಕ್ ಲೋಟಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮಲ್ಲಂದೂರು ಠಾಣಾ ಪಿ.ಎಸ್.ಐ. ರವೀಶ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಸಿಂಗಟಗೆರೆ ಪೊಲೀಸ್ ಠಾಣೆ.
ದಿನಾಂಕ 26.05.2022 ರಂದು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಾಪುರ ಬಸ್ ನಿಲ್ದಾಣದ ಬಳಿ ಶಂಕರ್ ರಾವ್ ಬಿನ್ ರಾಜಣ್ಣ ಎಸ್. ಮಾದಾಪುರ ವಾಸಿ ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನ ಬಳಿ ಇದ್ದ 90 ಎಂ.ಎಲ್. ನ 30 ಟೆಟ್ರಾ ಪ್ಯಾಕ್ 1053/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ ಶ್ರೀಮತಿ ಲೀಲಾವತಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಸಿಂಗಟಗೆರೆ ಪೊಲೀಸ್ ಠಾಣೆ.
ದಿನಾಂಕ 26.05.2022 ರಂದು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಟಗರೆ ಪಂಚನಹಳ್ಳಿ ರಸ್ತೆಯಲ್ಲಿ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಶುದ್ದಗಂಗಾ ಬಳಿ ರವಿ ಕುಮಾರ್ ಬಿನ್ ರಾಜಶೇಖರಪ್ಪ ಕೆ. ಬಿದರೆ ವಾಸಿ ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನ ಬಳಿ ಇದ್ದ 90 ಎಂ.ಎಲ್. ನ 44 ಟೆಟ್ರಾ ಎಂ.ಎಲ್. ನ 1545/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ ಶ್ರೀಮತಿ ಲೀಲಾವತಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.
ಮಲ್ಲಂದೂರು ಪೊಲೀಸ್ ಠಾಣೆ.
ದಿನಾಂಕ 27.05.2022 ರಂದು ಮಲ್ಲಂದೂರು ಠಾಣಾ ಸರಹದ್ದಿನ ಜಕ್ಕನಹಳ್ಳಿ ಗ್ರಾಮದ ಸ್ಮಶಾನದ ಬಳಿ ಇರುವ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿದ್ದ 1) ಸುರೇಶ ಬಿನ್ ದ್ಯಾವಯ್ಯ 2) ಮಂಜುನಾಥ ಬಿನ್ ಚಂದಯ್ಯ 3) ಮಂಜುನಾಥ ಜೆ,ಎಂ ಬಿನ್ ಮಂಜಯ್ಯ 4) ಅನಂದ ಬಿನ್ ಗುರುವ 5) ಲೋಕೇಶ ಬಿನ್ ಮುಳ್ಳಯ್ಯ ರವರುಗಳನ್ನು ವಶಕ್ಕೆ ಪಡೆದು, ಆರೋಪಿತರ ಬಳಿಯಿದ್ದ 520/- ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಚಾಪೆ ಇವುಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಚರಣೆಯಲ್ಲಿ ಮಲ್ಲಂದೂರು ಠಾಣಾ ಪಿ.ಎಸ್.ಐ. ರವೀಶ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಯಗಟಿ ಪೊಲೀಸ್ ಠಾಣೆ.
ದಿನಾಂಕ 26.05.2022ರಂದು ಯಗಟಿ ಠಾಣಾ ಸರಹದ್ದಿನ ಯಗಟಿ ಕೆಇಬಿ ಎಂ.ಎಸ್ ಹಿಂಬಾಗದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 1) ಸುರೇಶ ಬಿನ್ ಚನ್ನ ವೀರಪ್ಪ 2) ವಿಜಯ ಬಿನ್ ಪ್ರಕಾಶ 3) ಚಂದ್ರಪ್ಪ ಬಿನ್ ಲೇಟ್ ತಿಮ್ಮಪ್ಪ 4) ಶಂಕರಪ್ಪ ಬಿನ್ ರಂಗಪ್ಪ 5) ಮೂಡ್ಲಪ್ಪ ಬಿನ್ ತಿಮ್ಮಪ್ಪ 6)ಬಸವರಾಜಪ್ಪ ಬಿನ್ ನಂಜುಂಡಪ್ಪ 7] ಸುಂದರೇಶ ಬಿನ್ ಕೆಂಚಪ್ಪ 8] ಪರಮೇಶ ಬಿನ್ ರಾಮಪ್ಪ ರವರುಗಳನ್ನು ವಶಕ್ಕೆ ಪಡೆದು, ಆರೋಪಿತರ ಬಳಿಯಿದ್ದ 5200/- ನಗದು ಹಣ, 52 ಇಸ್ಪೀಟ್ ಎಲೆಗಳು, ಕಪ್ಪು ಬಣ್ಣದ ಟವಲ್ ಇವುಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಚರಣೆಯಲ್ಲಿ ಯಗಟಿ ಠಾಣಾ ಪಿ.ಎಸ್.ಐ. ಶಶಿಕುಮಾರ್ ವೈ.ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಕಳ್ಳತನ ಪ್ರಕರಣ.
ಬೀರೂರು ಪೊಲೀಸ್ ಠಾಣೆ.
ದಿನಾಂಕ 27-05-2022 ರಂದು ಅಕಾಶ್ ಹೆಚ್. ಎಸ್. ಬಿನ್ ಶಿವಪ್ಪ, ಹೇಳವಾರ ಹಟ್ಟಿ ಬೀರೂರು ಹೋಬಳಿ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 16-05-2022 ರಂದು ಪಿರ್ಯಾಧಿ ತನ್ನ ಬಾಬ್ತು ಕೆಎ-03- ಕೆಡಿ-3669 ನಂಬರಿನ ಕೆ.ಟಿ.ಎಂ. 200 ಡ್ಯೂಕ್ ಬೈಕ್ ಅನ್ನು ಬೀರೂರು ಅಜ್ಜಂಫುರ ರಸ್ತೆಯಲ್ಲಿರುವ ಬಾಬು ರವರ ಮನೆಯ ಬಳಿ ನಿಲ್ಲಿಸಿ ಹೋಗಿದ್ದು ದಿನಾಂಕ 18/05/2022 ರಂದು ವಾಪಾಸ್ಸು ಬಂದು ನೋಡಲಾಗಿ ಬೈಕ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೆ ಯಾರೋ ಕಳ್ಳರು ಸದರಿ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಬೈಕಿನ ಬೆಲೆ 1,30,000/- ರೂ ಗಳಾಗಿದ್ದು, ಕಳ್ಳರನ್ನು ಹಾಗೂ ಬೈಕ್ ಅನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣ.
ಅಜ್ಜಂಫುರ ಪೊಲೀಸ್ ಠಾಣೆ
ದಿನಾಂಕ;27-05-2022 ರಂದು ಗಿರೀಶ್ ಬಿನ್ ಜಗದೀಶಪ್ಪ ವಾಸ ಹುಲಿಹಳ್ಳಿ ಅಜ್ಜಂಪುರ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ತಂದೆ ಜಗದೀಶಪ್ಪ ದಿನಾಂಕ;27/05/2022 ರಂದು ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಗಂಡ ಜಗದೀಶಪ್ಪ, 5.8 ಅಡಿ ಎತ್ತರ, 584 ವರ್ಷ, ಸಾದಾರಣ ಮೈ ಕಟ್ಟು, ಕಪ್ಪು ಬಣ್ಣ, ಕನ್ನಡ ಬಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಶರಟು ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ತಂದೆ ಜಗದೀಶಪ್ಪ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಗಾಂಜಾ ಮಾರಾಟ ಪ್ರಕರಣ.
ಬಣಕಲ್ ಪೊಲೀಸ್ ಠಾಣೆ.
ದಿನಾಂಕ 26-05-2022 ರಂದು ಬಣಕಲ್ ಠಾಣಾ ಸರಹದ್ದಿನ ಅತ್ತಿಗೆರೆ ಗ್ರಾಮದಲ್ಲಿ ಹಾದು ಹೋಗಿರುವ ಕೆ.ಎಂ. ರಸ್ತೆಯಲ್ಲಿ ಸುಮನ್ ಬಿನ್ ಚಂದ್ರ ಅತ್ತಿಗೆರೆ ವಾಸಿ ಈತನು ಗಾಂಜಾ ಸೇವನೆ ಮಾಡಿ ಸಾರ್ಚಜನಿಕರಿಗೆ ತೊಂದರೆ ಮಾಡುತ್ತಿದ್ದು , ಆರೋಪಿತನು ವಶಕ್ಕೆ ಪಡೆದು ಅರೋಫಿತನು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ತಪಾಸಣೆಯಿಂದ ದೃಡಪಟ್ಟಿದ್ದು, ಆರೋಪಿತನ ವಿರುದ್ದ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಬಣಕಲ್ ಪಿ.ಎಸ್.ಐ. ಶ್ರೀಮತಿ ಗಾಯತ್ರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.